Sunday 10 December 2023

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ‌ಹೆಮ್ಮೆಯ ಓದುಗರಾದ ಡಾ.ಚೈತ್ರ ಅವರ ಅಭಿಪ್ರಾಯವ


 ನಮ್ಮ ಸಂಸ್ಕೃತಿಯ ಭಾಗವಾಗಿರುವ ದೈವಾರಾಧನೆಯ ಪರಂಪರೆ ಮುಂದುವರೆಯಬೇಕಾದರೆ ಮುಂದಿನ ಪೀಳಿಗೆಗೆ ದೈವಗಳ ಹಿನ್ನೆಲೆಯ ಜ್ಞಾನವೂ ಮುಖ್ಯ.ಈ ಹಿನ್ನೆಲೆಯಲ್ಲಿ ಡಾ. ಲಕ್ಷ್ಮೀ ಜಿ. ಪ್ರಸಾದರ ಈ ಪುಸ್ತಕ ದೈವಾರಾಧನೆಯ ಮಾಹಿತಿಯ ಕಣಜದಂತಿದೆ.ಯುವ ಸಂಶೋಧಕರಿಗೆ ಕುತೂಹಲ ಹುಟ್ಟಿಸುವ, ಹೊಸ ಚಿಂತನ-ಮಂಥನಗಳಿಗೆ ಸ್ಫೂರ್ತಿ ತುಂಬುವ ಅಮೂಲ್ಯ ಪುಸ್ತಕವಾಗಿದೆ. ಆಧುನಿಕ ಬದುಕಿನ ಹೊಸ ಬದಲಾವಣೆ, ಆಡಂಬರಗಳಗಳ ಅಲೆಯಲ್ಲಿ ದೈವಾರಾಧನೆಯ ಮೂಲ ಉದ್ದೇಶ, ಮಹತ್ವ ಎಲ್ಲರಿಗೂ ಮನದಟ್ಟು ಆಗಬೇಕೆಂದರೆ ಇಂತಹ ಪುಸ್ತಕಗಳ ಓದು ಸಹಕಾರಿಯಾಗುವುದು.ದೈವಾರಾಧನೆಯ ಆಚರಿಸುವ ಪ್ರತಿ ಕುಟುಂಬದೊಂದಿಗೆ ಒಂದು ಪುಸ್ತಕವಿದ್ದರೆ ಮುಂದಿನ ಪೀಳಿಗೆಗೂ ಮೂಡುವ ಹಲವು ಪ್ರಶ್ನೆ, ಸಂಶಯಗಳಿಗೆ ಈ ಮೂಲಕ ಸ್ಪಷ್ಟ ಉತ್ತರ ದೊರಕುವುದು.ದೈವದ ಆಶೀರ್ವಾದದೊಂದಿಗೆ ಓದ ಬಯಸುವ ಎಲ್ಲಾ ಸಹೃದಯರಿಗೆ ಪುಸ್ತಕ ಒದಗುವಂತಾಗಲಿ.🙏

ಡಾ.ಚೈತ್ರಾ 

No comments:

Post a Comment