Sunday 10 December 2023

ಕರಾವಳಿಯ ಸಾವಿರದೊಂದು ದೈವಗಳು : ಕಾಂತಾರ : ನಾ ಕಂಡಂತೆ - ಡಾ.ಲಕ್ಷ್ಮೀ ಜಿ ಪ್ರಸಾದ್


 ಕಾಂತಾರ - ನಾ ಕಂಡಂತೆ

- ಡಾ.ಲಕ್ಷ್ಮೀ  ಜಿ ಪ್ರಸಾದ್ 

ಆಧಾರ : ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಕಿ ಸಾಂಸ್ಕೃತಿಕ‌ವಿಶ್ಲೇಷಣಾತ್ಮಕ ನೋಟ: ಲೇ,- ಡಾ.ಲಕ್ಷ್ಮೀ ಜಿ ಪ್ರಸಾದ್ ( Lakshmi V)

mobile : 9480516684 


#ಕಾಂತಾರ 

ಸಿನೇಮ ಬಿಡುಗಡೆಯ ದಿನದಿಂದ ಕಾಂತಾರದ ಬಗ್ಗೆ ನನ್ನಲ್ಲಿ ಕರೆ ಮಾಡಿ ಮಾತನಾಡಿದವರು ಮೆಸೇಜ್ ಮಾಡಿ ಮಾಹಿತಿ ಕೇಳಿದವರು ನೂರಾರು ಮಂದಿ,ಸಿನೇಮ ನೊಡುವ ಮೊದಲೆ ಅನೇಕರ ಕೋರಿಕೆಯ ಮೇರೆಗೆ ದೈವಾರಾಧನೆಯ ಬಗ್ಗೆ ಸ್ಥೂಲವಾಗಿ ಕ್ಲಬ್ ಹೌಸಿನಲ್ಲಿ ಮಾತನಾಡಿದೆ ಕೂಡ 


ಸಿನೇಮ ಬಿಡುಗಡೆಯ  ದಿನ ವೇ ನಾನು ಅಗತ್ಯ ಕಾರ್ಯ ನಿಮಿತ್ತ ಊರಿಗೆ ಹೋದ ಕಾರಣ ಇಂದಿನವರೆಗೆ ನನಗೆ ನೋಡಲಾಗಲಿಲ್ಲ.ಏಳನೇ ತಾರೀಕಿನಿಂದ ವಿಶೇಷ ಕರ್ತವ್ಯಕ್ಕೆ ನಿಯೋಜನೆ ಇದ್ದ ಕಾರಣ ನಾನು ಬೆಂಗಳೂರಿನಲ್ಲಿ ಟಿಕೆಟ್ ರಿಸರ್ವ್ ಮಾಡಲು ಹೇಳಿರಲಿಲ್ಲ.ವಿಶೇಷ ಕರ್ತವ್ಯ ಮುಂದೆ ಹೋಯಿತಾದರೂ ತಕ್ಷಣಕ್ಕೆ ಕಾಂತಾರ ನೋಡಲು ಟಿಕೆಟ್ ಸಿಗಲಿಲ್ಲ.ಈವತ್ತು ಅದೃಷ್ಟವಶಾತ್ ಮಲ್ಲತ್ತಳ್ಳಿಯ vR cinemas ಚಿತ್ರ ಮಂದಿರದಲ್ಲಿ ನನಗೂ ಮಗನಿಗೂ ಎರಡು ಟಿಕೆಟ್ ಸಿಕ್ತು,ಹೋಗಿ ನೋಡಿ ಬಂದೆವು


ನಾನು ವಿಮರ್ಶಕಿಯಲ್ಲ

ಅದರಲ್ಲಂತೂ ಸಿನೇಮಾದ ವಿಮರ್ಶೆ ಇದು ತನಕ ಬರೆದೇ ಇಲ್ಲ.ಸಿನೇಮ ವೀಕ್ಷಣೆ ಮಾಡಿದ್ದು ಕೂಡ ಕಡಿಮೆ.ಅನೇಕರು ತುಂಬಾ ಒಳ್ಳೆಯದಿದೆಂದು ಹೇಳಿದರೆ ಮಾತ್ರ ನಾನು ಹೋಗಿ ನೋಡುದು.ನನಗೆ ಮಚ್ಚು ಲಾಂಗು ಪೆಟ್ಟು ಗುಟ್ಡು ರಕ್ತ ಸುರಿವದ್ದು ಕೈಕಾಲು ತುಂಡಾಗಿ ಭೀಭತ್ಸವಾಗಿ ಕಾಣುವ ದೃಶ್ಯಗಳನ್ನು ನೋಡಲಾಗುವುದಿಲ್ಲ.ಹಾಗಾಗಿ ಅಂತಹ ಸಿನೆಮಗಳನ್ನು ನೋಡುವುದೇ ಇಲ್ಲ.ಒಂದೊಮ್ಮೆಮನೆ  ಟಿವಿಯಲ್ಲಿ ನೋಡುದಾದರೆ ಅಂತಹ ದೃಶ್ಯಗಳು ಬಂದಾಗ ಎದ್ದು ಬೇರೆಡೆ ಹೋಗ್ತೇನೆ ,ಅದೃಷ್ಟವಶಾತ್ ಕಾಂತಾರದಲ್ಲಿ ಹೊಡೆದಾಟ ಇರುವುದಾದರೂ ಅಂತಹ ಭೀಭತ್ಸ ದೃಶ್ಯಗಳಿರಲಿಲ್ಲ


ಇನ್ನು ಅನೇಕರು ನನ್ನ ಸಮೀಕ್ಷೆಯನ್ನು ಕಾಯುತ್ತಿರುವುದು ತಿಳಿದ ಮೇಲೆ ನನಗೆ ಮೊದಲಿನಂತೆ ಸಹಜವಾಗಿ ಬರೆಯಲು ಆಗುವುದಿಲ್ಲವೇನೋ ಎಂಬ ಆತಂಕ ಕಾಡುತ್ತಿದೆ


ಅದಿರಲಿ

ಕಾಂತಾರದ ಬಗ್ಗೆ ಒಂದು ಪದದಲ್ಲಿ ಹೇಳುದಾದರೆ ಅತ್ಯದ್ಭುತ ಎನ್ನಬಹುದು.

ಧಾರ್ಮಿಕ ಪರಿಕಲ್ಪನೆಗೆ ಭಂಗ ಬಂದಿಲ್ಲ.

ಭಕ್ತಿಯಿಂದ ನೋಡುವವರಿಗೆ, ,ಮನೋರಂಜನಾ ದೃಷ್ಡಿಯಿಂದ ನೋಡುವವರಿಗೆ,ಕಲಾತ್ಮಕವಾಗಿ ನೋಡುವವರಿಗೆ ,ತಾಂತ್ರಿಕವಾಗಿ ನೋಡುವವರಿಗೆ ಎಲ್ಲರಿಗೂ  ಪೂರ್ಣ ತೃಪ್ತಿಯನ್ನು ಕೊಡಬಲ್ಲ ಸಿನೇಮ ಇದು.

ಅನ್ಯಾಯದ ವಿರುದ್ಧದ ಹೋರಾಟ ಅಂತಿಮವಾಗಿ ಸಿಗುವ ಜಯದ ನೀತಿ ಕೂಡ ಅಗತ್ಯವಾದದ್ದೇ .ಸರ್ಕಾರಿ ಅಧಿಕಾರಿಗಳು ದ್ವೇಷ ಸಾಧಿಸಿದರೆ ಏನೆಲ್ಲ ಮಾಡಬಲ್ಲರು ಎಂಬುದನ್ನು ಅರಣ್ಯಾಧಿಕಾರಿಯ ಪಾತ್ರದ ಮೂಲಕ ತೋರಿಸಿದ್ದಾರೆ.ಒಂದಿನಿತು ನೇರ ನಡೆ ನುಡಿಯ ಬರವಣಿಗೆಯ ಹವ್ಯಾಸ ಇರುವ ನಮ್ಮಂಥಹ ಸರ್ಕಾರಿ ಉದ್ಯೋಗಿಗಳೇ ಇಂತಹದ್ದರ ಸಣ್ಣ ಅನುಭವವನ್ನು ಪಡೆಯುತ್ತೇವೆ,ಇನ್ನು ಇವರುಗಳನ್ನು ಎದುರು ಹಾಕಿಕೊಳ್ಳುವ ಸಾಮಾನ್ಯ ಜನರ ಪಾಡೇನು ? ನನಗೆ ಸದಾ ಕಾಡುವ ಪ್ರಶ್ನೆ ಇದು‌ಇದು ಕಾಲ್ಪನಿಕ ಕತೆ ಹಾಗಾಗಿ ಇದರಲ್ಲಿ ಅನೂಹ್ಯ ತಿರುವಿದೆ ಸಮಾಧಾನದಿಂದ ಕೇಳಿಸಿಕೊಂಡಿದ್ದರೆ ದೈವದ ನುಡಿ ನನಗೂ ಕೇಳಿಸುತ್ತಿತ್ತು ಎಂಬ ಮಾತು ಕಿರಿದುದರಲ್ಲಿ ಹಿರಿದುದನ್ನು ಧ್ವನಿಸುತ್ತದೆ 

ಕಳೆದ ಇಪ್ಪತ್ತೊಂದು ಇಪ್ಪತ್ತೆರಡು ವರ್ಷಗಳಲ್ಲಿ ದೈವಗಳ ಬಗ್ಗೆ ಕ್ಷೇತ್ರ ಕಾರ್ಯ ಅಧ್ಯಯನ ಮಾಡಿದ ನನಗೆ "ನನಗೇನಾದರೂ ಆದರೆ ನೀವು ನಮ್ಮವರ ಜೊತೆಗಿರುತ್ತೀರಲ್ಲ ಎಂದು ಶಿವ ಕೇಳಿದಾಗಲೇ ನಾನು ಕೊನೆಯನ್ನು ಊಹಿಸಿದ್ದೆ.  ಕತೆಗೆ ಅದು ಅಗತ್ಯವಾಗಿತ್ತು ಯಾಕೆಂದರೆ ಯಾಕಾಗಿ‌ಯೇ ಮಾಡಿದರೂ ಕೊಲೆ ಕೊಲೆಯೇ .ಮಾನವನಾಗಿ ಅದು ಶಿಕ್ಷಾರ್ಹ ಅಪ ರಾಧವೇ ಹಾಗಾಗಿ ಅಂತಹ ತಿರಿವಿನ ಅಗತ್ಯ ಇಲ್ಲಿತ್ತು .ಆದರೆ ಕೊನೆ ಹಾಗಾಗದಿರಲಿ ಎಂದೇ ಹಾರೈಸಿದ್ದೆ ಯಾಕೆಂದು ಇಲ್ಲಿ ಹೇಳಲಾರೆ ,ಸಾಧ್ಯವಾದರೆ ರಿಷಭ್ ಶೆಟ್ಟಿಯವರಲ್ಲೊಮ್ಮೆ ಮಾತನಾಡುವೆ Rishab Shetty 


ಮನುಷ್ಯರು ಮಾಯಕ ಹೊಂದಿ ದೈವ ಸಾನ್ನಿಧ್ಯವನ್ನು ಸೇರಿ ದೈವಗಳೇ ಆಗುವ ಅನೇಕ ಕಥಾನಕಗಳು ತುಳುನಾಡಿನಲ್ಲಿದೆ


ಕಾರಣಾಂತರಗಳಿಂದ ಮಾಯಕ ಹೊಂದಿ ಜುಮಾದಿ ದೈವ ಸಾನ್ನಿದ್ಯವನ್ನು ಸೇರಿದ ಬ್ರಿಟಿಷ್ ಸುಭೇದಾರ ಕನ್ನಡ ಬೀರ ದೈವವಾಗಿ ಆರಾಧನೆ ಪಡೆಯುತ್ತಾನೆ.ಕಾಸರಗೋಡು ಸಮೀಪದ ಪೋಲೀಸ್ ಒಬ್ಬ ದೈವತ್ವ ಪಡೆದು ಪೋಲೀಸ್ ತೆಯ್ಯಮ ಆಗಿ ಅರಾಧಿಸಲ್ಪಡುತ್ತಾನೆ.ಮುಕಾಂಬಿ ಗುಳಿಗ ಸುಬ್ಬಿಯಮ್ಮ ಗುಳಿಗ ,ಜತ್ತಿಂಗ ,ಕುಂಞಿ ಭೂತ ಅಕ್ಕಚ್ಚು ಕೊರಗ ತನಿಯ ,ಬ್ರಾಹ್ಮಣತಿ ಭೂತ,ಬ್ರಾಣ ಭೂತ,ಮಾಪುಲೆ ಮಾಪುಲ್ತಿ ಭೂತಗಳು,ಆಲಿ ಭೂತ ,ಅರಬ್ಬಿ ಭೂತ,ದೂಮ‌ದೈವ  ಮೊದಲಾದ ಅನೇಕ ದೈವಗಳು ಮೊದಲು ಮಾನವರಾಗಿದ್ದು ಕಾರಣಾಂತರಗಳಿಂದ ದೈವತ್ವ ಪಡೆದು ಆರಾಧಿಸಲ್ಪಡುವ ಶಕ್ತಿಗಳಾಗಿದ್ದಾರೆ 


ಇನ್ನು ದೈವ ಕಟ್ಟಿದಾತ ಮಾಯಕ ಹೊಂದುವದ್ದು ಇದೆಯೇ ? ಎಂದು ಮೊನ್ನೆಯಿಂದ ಅನೇಕರು ಕೇಳಿದ್ದಾರೆ.ಯಾಕೆಂದು ನನಗೆ ಅರ್ಥವಾಗಿರಲಿಲ್ಲ,ಸಿನೇಮ ನೋಡಿದಾಗ ಅರ್ಥವಾಯಿತು 

ಇಂತಹ ಅನೇಕ  ಕಥಾನಕಗಳು ದೈವಗಳಿಗೆ ಸಂಬಂಧಿಸಿ ಪ್ರಚಲಿತವಿವೆ


ಸುಳ್ಯ ಉತ್ತರ ಕೊಡಗು ಪರಿಸರಲ್ಲಿ ಅಜ್ಜಿ ಭೂತದೊಡನೆ ಕೂಜಿಲು ಹೆಸರಿನ ಎರಡು ದೈವಗಳಿಗೆ ಆರಾಧನೆ ಇದೆ.ಈ ದೈವಗಳ ಕೋಲದ ಕೊನೆಯಲ್ಲಿ ಸೇರಿದ ಜನರೆಲ್ಲ ಸೇರಿ ಕೈ ಕೈ ಹಿಡಿದು ದೈವಗಳ ಸುತ್ತ ಭದ್ರವಾಗಿ ಕೋಟೆ ಕಟ್ಟಿ ನಿಲ್ಲುತ್ತಾರೆ.

ಆಗ ದೈವಗಳು ಇವರ ಕೈಯಿಂದ ತಪ್ಪಿಸಿಕೊಂಡು ಹೊರ ಹೋಗಲು ಪ್ರಯತ್ನ ಪಡುತ್ತವೆ.ಜನರು ಬಿಡುವುದಿಲ್ಲ.


ಒಂದೊಮ್ಮೆ ಈ ಕೂಜಿಲು  ದೈವಗಳು  ಜನರು ಕಟ್ಟಿದ ಕೋಟೆಯಿಂದ ತಪ್ಪಿಸಿಕೊಂಡು ಹೊರ ಹೋದರೆ ಮತ್ತೆ ಹಿಂದೆ ಬರುವುದಿಲ್ಲ.ಕಾಡಿನೊಳಗೆ ಹೋಗಿ‌ ಮಾಯವಾಗುತ್ತಾರೆ ಎಂಬ ಐತಿಹ್ಯವಿದೆ.ಮೊದಲು ಹದಿನಾರು ಕೂಜಿಲು ದೈವಗಳಿಗೆ ಕೋಲ ಇತ್ತು.ಕೋಟೆ ತಪ್ಪಿಸಿಕೊಂಡು ಒಬ್ಬೊಬ್ಬರೇ ಹೊರ ಹೋಗಿ ಮಾಯವಾಗಿ ಇಬ್ಬರು ಮಾತ್ರ ಉಳಿದಿದ್ದಾರೆ ಹಾಗಾಗಿ ಈಗ ಎರಡು ಕೂಜಿಲು ದೈವಗಳಿಗೆ ಕೋಲ ಕಟ್ಟಿ ಆರಾಧಿಸುತ್ತಾರೆ.ತಮ್ಮ ಮನೆಯ ಹಿರಿಯರಲ್ಲೊಬ್ಬರು ಹೀಗೆ ಮಾಯಕ ಹೊಂದಿದ್ದಾರೆ ಎಂದು‌ ಭೂತ ಕಟ್ಟುವ ಹಿರಿಯ ಕಲಾವಿದರಾದ ಪೂವಪ್ಪರು ನನ್ನಲ್ಲಿ ಮಾತನಾಡುವಾಗ ಹೇಳಿದ್ದರು.ಇದೇ ರೀತಿಯ ಅಚರಣೆ ಹಾಗೂ ನಂಬಿಕೆಗಳು ವರ್ಣಾರ ಪಂಜುರ್ಲಿ,ದುಗಲಾಯ,ಸುತ್ತು ಕೋಟೆ ಚಾಮುಂಡಿ ದೈವಗಳ ಬಗ್ಗೆಯೂ ಇದೆ 


ತಮ್ಮ  ಮನೆಯಲ್ಲಿ ರಾವು ಗುಳಿಗ ಆವೇಶ ಬಂದು ಗೋಳಿ‌ಮರವನ್ನು ಏರಿ ಮಾಯವಾದ ಬಗ್ಗೆ ಹೊಸಬೆಟ್ಟಿನ ಗಣೇಶ್ ರಾಮ್ ಅವರು ತಿಳಿಸಿದ್ದಾರೆ ಮಾಯವಾದದ್ದಕ್ಕೆ ಸಾಕ್ಷಿಯಾಗಿ ಮರದ ಕೆಳಗೆ ದೈವದ ಗಗ್ಗರ ಸಿಕ್ಕಿತಂತೆ ,ನಂತರ ಇಲ್ಲಿ ರಾವು ಗುಳಿಗನ ಕೋಲವನ್ನು ನಿಲ್ಲಿಸಿದರಂತೆ.ಆದರೆ ಪದೇ ಪದೇ ಆ ಊರಿನಲ್ಲಿ ಅಪಘಾತಗಳಾಗಲು ಶುರುವಾಗಿ ನಂತರ ಪುನಃ ಈ ದೈವವನ್ನು ಕಟ್ಟಿ ಕೋಲ ಕೊಟ್ಟು ಆರಾಧಿಸಲು ಶುರು ಮಾಡಿದ್ದಾರೆ ಅದೇ ರೀತಿ ಸುಳ್ಯದ ದೇಂಗೋಡಿಯ ಜಾಲಾಟದಲ್ಲಿ ಬಹಳ ಉಗ್ರ ಸ್ವರೂಪದ ದೈವ ಜಂಗ ಬಂಟ  ಆವೇಶದಿಂದ ಓಡಿ ಮಾಯವಾಗುತ್ತದೆ ಬಿದಿರು ಮೆಳೆಯ ತುದಿಯಲ್ಲಿ ಗಗ್ಗರ ಸಿಲುಕಿಕೊಂಡು ಸಿಕ್ಕಿತೆಂಬ ಮಾಹಿತಿಯನ್ನು ಈ ಮನೆಯ ನಿತಿನ್ ಅವರು ತಿಳಿಸಿದ್ದಾರೆ,ಕೂಜಿಲು ದೈವ ಕಟ್ಟಿರುವವರಲ್ಲಿ ಒಬ್ಬಾತ ತಮ್ಮ ಮನೆಯಲ್ಲಿ ಮಾಯವಾದದ್ದೆಂಬ ಐತಿಹ್ಯ ಇರುವುದನ್ನು ದೀಪಕ ಮುರುಡಿತ್ತಾಯರು ತಿಳಿಸಿದ್ದಾರೆ.ಈ ಕಾರಣದಿಂದ ಅಲ್ಲಿ ಸುಮಾರು ಸಮಯ ಕೂಜಿಲು ದೈವಗಳ ಕೋಲವನ್ನು ನಿಲ್ಲಿಸಿದ್ದರಂತೆ 

ಇತ್ತೀಚೆಗೆ ಸುಳ್ಯದಲ್ಲಿ ಹನ್ನೊಂದು ಕೊರಗ ತನಿಯ ದೈವಗಳ ಕೋಲ ಆಗುವಾಗ ಹನ್ನೆರಡನೆಯ ಕೊರಗ ತನಿಯ ದೈವ ಕಾಣಿಸಿಕೊಂಡು ಅದೃಶ್ಯವಾಗಿದೆ ಸಾಕ್ಷಿಯಾಗಿ ಆ ದೈವ ಧರಿಸಿದ್ದ ಮುಟ್ಟಾಳೆ ಇತ್ತು ಎಂಬ  ಬಗ್ಗೆ ಕೇಳಿದ್ದೆ.


ಇನ್ನು ಅನೇಕ ವ್ಯಕ್ತಿಗಳನ್ನು ದೈವಗಳು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಂಡ ವಿಚಾರ ಅನೇಕ ದೈವಗಳ ಕಥೆಯಲ್ಲಿದೆ.ನನಗೆ ಸಿಕ್ಕವನ್ನೆಲ್ಲ 1238 ದೈವಗಳ ಮಾಹಿತಿ ಇರುವ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಕಿ ದಾಖಲಿಸಿದ್ದೇನೆ ಕಾಂತಾರದಂತಹ ಸಾವಿರ ಸಿನೇಮಗಳಿಗೆ ಸಾಕಾಗುವಷ್ಟು ಕಥಾನಕಗಳು ಇದರಲ್ಲಿದೆ 


ಹೀಗೆ ಮಾಯ ಎಂದರೆ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೃಶ್ಯವಾಗಲು ಸಾಧ್ಯವೇ ? ಎಂಬುದೊಂದು ಪ್ರಶ್ನೆ..

falling to 5 th dimention ಎಂದರೆ ಜನರು ನೋಡುತ್ತಿದ್ದಂತೆಯೇ ವ್ಯಕ್ತಿಗಳು ಅದೃಶ್ಯವಾದ ಸುಮಾರು 163 ಪ್ರಕರಣಗಳು ದಾಖಲಾಗಿವೆ.ಇವು‌ ಮೆಟ ಫಿಸಿಕ್ಸ್ ನಲ್ಲಿ ಬರುತ್ತವೆ.ಉದ್ದ ಅಗಲ ಎತ್ತರ ಕಾಲ ಎಂಬ ನಾಲ್ಕು dimension ನಲ್ಲಿ ನಾವು ಬದುಕುತ್ತಿದ್ದೇವೆ.ಇದನ್ನು ಮೀರಿದ ಐದನೆಯ dimension ಗೆ ಹೋದ ವ್ಯಕ್ತಿ ವಸ್ತು ಅದೃಶ್ಯವಾಗುತ್ತದೆ ಎಂಬ ವಿಚಾರವನ್ನು ಉಜಿರೆಯ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಫಿಸಿಕ್ಸ್ ಪ್ರೊಫೆಸರ್ ಕೇಶವರು ನಾವು ವಿದ್ಯಾರ್ಥಿಗಳಾಗಿದ್ದಾಗ ಹೇಳಿದ್ದರು


ಅಂತೆಯೇ ಕಪ್ಪು ರಂಧ್ರ/ black holes ಗಳು ಇವೆಯಂತೆ ಇವುಗಳನ್ನು ಪ್ರವೇಶ ಮಾಡಿದ ಬೆಳಕು ಕೂಡ ಹೊರಬರುವುದಿಲ್ಲ‌ ಅಷ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆಯಂತೆ

ಇದಲ್ಲದೆ ಬರ್ಮುಡಾ ಟ್ರ್ತಾಂಗಲ್ ನ ಕುರಿತಾಗಿ ಅನೇಕ ಐತಿಹ್ಯಗಳಿವೆ.ಈ ಪ್ರದೇಶವನ್ನು ಸಮೀಪಿಸಿದ ಹಡಗು ವಿಮಾನ ಎಲ್ಲವೂ ಅದೃಶ್ಯವಾಗಿವೆ.ಇವನ್ನು ಪತ್ತೆ ಮಾಡಲು ಹೋದವರೂ ನಾಪತ್ತೆಯಾಗಿದ್ದಾರಂತೆ


ಅಂತೆಯೇ ದೈವ ಕಟ್ಟಿದ ಕಲಾವಿದರಲ್ಲೂ ವಿಶೇಷ ಶಕ್ತಿಯ ಅವೇಶವಾಗಿ / ಶಕ್ತಿ ಉತ್ತೇಜನಗೊಂದು ಇಂತಹ ಪವಾಡಗಳು ನಡೆಯಬಾರದೆಂದೇನೂ ಇಲ್ಲ.

ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ.ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಕ ಎನ್ನಬಹುದೇ ಹೊರತು ಇಲ್ಲವೇ ಇಲ್ಲ ಎನ್ನಲಾಗದು 


ದೈವವನ್ನು ಒಂದೆಡೆಯಿಂದ ಭೂಮಿ ಕೊಟ್ಟು ತಗೊಂಡು ಹೋದರೆ ಅಲ್ಲಿ ದೈವ ಇರುತ್ತದೆಯೇ ? ಎಂದೂ ಅನೇಕರು ಕೇಳಿದ್ದಾರೆ.ಒಬ್ಬನೇ ದೇವರಿಗೆ ಅನೇಕೆಡೆಗಳಲ್ಲಿ ಆರಾಧನೆ ಇಲ್ಲವೇ ? ಹಾಗೆಯೇ ಒಂದೇ ದೈವಕ್ಕೆ ಅನೇಕೆಡೆಗಳಲ್ಲಿ ಆರಾಧನೆ ಇದೆ.ದೈವಗಳನ್ನು ವೀಳ್ಯದೆಲೆಯಲ್ಲಿ ಮಂತ್ರಿಸಿ ಒಂದೆಡೆಯಿಂದ ಇನ್ನೊಂದು ಕಡೆಗೆ ಕೇಳಿ ತೆಗೆದುಕೊಂಡು ಹೊಗುವ ಅನೇಕ ಐತಿಹ್ಯಗಳು ಕರಾವಳಿಯಲ್ಲಿ ಪ್ರಚಲಿತವಿವೆ.ಇದನ್ನು ಇಲ್ಲಿ ದೈವಗಳ ಪ್ರಸರಣ ಎನ್ನುತ್ತಾರೆ 


ಯಾವುದೇ ಕಥೆ ಕಾದಂಬರಿ ಸಿನೇಮಾದಲ್ಲಿ ಒಂದು ಪ್ರೇಮ ಕಥಾನಕವಿಲ್ಲದಿದ್ದರೆ ಅದು ಶುಷ್ಕವೆನಿಸುತ್ತದೆ.ಇಲ್ಲೂ ಒಂದು ನವಿರು ಪ್ರೇಮದ ಒಲವಿನ ಕಥೆಯಿದೆ.ಕೊನೆಯಲ್ಲಿ ಗಂಡನೂ ಮಗನೂ ದೈವ ಚಿತ್ತಕ್ಕೆ/ ಸೇರಿಗೆಗೆ ಸೇರಿದಾಗ ಕಮಲಕ್ಕನಿಗೆ ಭರವಸೆಯ ಕಿರಣದ ಮೊಗ್ಗು ಒಂದು ಅರಳಲು ಸಿದ್ದವಾಗಿರುತ್ತದೆ ,ಕಮಲಕ್ಕನ ಪಾತ್ರ ಮಾಡಿದ ನಮ್ಮ ಆತ್ಮೀಯರಾದ ಮುರಳೀಧರ ಉಪಾಧ್ಯರ ಮಗಳು ನಮ್ಮ ಕಣ್ಣ ಮುಂದೆ ಬೆಳೆದ ಹುಡುಗಿ ಮಾನಸಿ ಸುಧೀರ್ ನ ಅಭಿನಯ ಬಹಳ ಪ್ರೌಢವಾಗಿ ಮನೋಜ್ಞವಾಗಿದೆ

ಎಳೆಯ ಬಾಲಕ ಶಿವನಾಗಿ ಮಾಡಿದ ಬಾಲ ಕಲಾವಿದನ ಅಭಿನಯವೂ ಬಹಳ ಚೆನ್ನಾಗಿದೆ.ಪಂಜುರ್ಲಿ ಭೂತ ಕಟ್ಟಿದಾಗ ಆ ವ್ಯಕ್ತಿ ಕಾಡಿನ ಒಳಗೆ ಓಡಿದಾಗ ಇಂತಹ ಕಥಾನಕಗಳ ಅರಿವಿರುವ ಭೂತ ಕಟ್ಟುವ ಕಲಾವಿದರ ಮನೆಯಂಗಳದಲ್ಲಿ ಬೆಳೆದ ಬಾಲಕನಿಗೆ ಉಂಟಾಗಿರಬಹುದಾದ ಅತಂಕ ಭಯ ಆ ಬಾಲ‌ಕಲಾವಿದನ ಕಣ್ಣುಗಳಲ್ಲಿ ಸಹಜ ಎನಿಸುವಂತೆ ಮೂಡಿ ಬಂದಿದೆ

ದಣಿಗಳ ಪಾತ್ರ ಮಾಡಿದ ಅಚ್ಯತ ಕುಮಾರರದು ಪಾತ್ರೋಚಿತವಾದ ಸಮರ್ಥ ಅಭಿನಯ..ಅರ್ಧ ಆಗುವ ತನಕ ನನಗೆ ಅವರೇ ಪ್ರತಿ ನಾಯಕ ಎಂದು ಗೊತ್ತಾಗಿರಲೇ ಇಲ್ಲ


ಗುರುವನ ಪಾತ್ರದಲ್ಲಿ ದೈವ ಕಟ್ಟುವವರಲ್ಲಿರುವ  ಸ್ನಿಗ್ಧತೆ ಮುಗ್ಧತೆ ಸತ್ಯ ಸಂಧತೆ ,ಭಕ್ತಿ ಕಾಣುತ್ತಿತ್ತು.ಗುರವನ ಸಾವು ಕಣ್ಣಂಚಿನಲ್ಲಿ ನೀರು ತರಿಸದೇ ಇದ್ದರೆ ಅಂತಹವರು ಮನುಷ್ಯರಾಗಿರಲು ಯೋಗ್ಯರಲ್ಲ‌


ಕಥಾ ನಾಯಕ ರಿಷಭ್ ಶೆಟ್ಟಿಯವರ ಅಭಿನಯದ ಬಗ್ಗೆ ಹೇಳಲು ಪದಗಳಿಲ್ಲ.ಪೆಟ್ಟುಗುಟ್ಟು ಗಲಾಟೆಯಲ್ಲಿ ನುರಿತ ಕಲಾವಿದರೆಲ್ಲರೂ ಅದ್ಭುತವಾಗಿ ನಟಿಸುತ್ತಾರೆ ಆದರೆ ಪಂಜುರ್ಲಿ ದೈವವಾಗಿ ,ಗುಳಿಗನ ಆವೇಶ ಪಡೆದ ಪಾತ್ರಿಯಂತೆ ,ಗುಳಿಗ/ ಕ್ಷೇತ್ರ ಪಾಲ  ದೈವವಾಗಿ  ನೈಜ ಅಭಿನಯ ಸುಲಭದ ಮಾತಲ್ಲ.ದೈವ ಕಟ್ಟಿದಾಗಿನ ರೀತಿ ರಿವಾಜುಗಳಿಗೆ ಒಂದಿನಿತೂ ಭಂಗ ಬಾರದಂತೆ ,ದೈವಗಳ ಗಾಂಭಿರ್ಯಕ್ಕೆ ಧಕ್ಕೆಯಾಗದಂತೆ ನುರಿತ ದೈವ ಕಟ್ಟುವ ಕಲಾವಿದರಂತೆಯೇ ಕಟ್ಟಿ ಅಭಿನಯಿಸಿದ್ದಾರೆ 


ಎಡ ಬಲಗಳ ಯಾವುದೇ ಹಿಡನ್  ಅಜೆಂಡಾಗಳು ನನಗಿದರಲ್ಲಿ ಒಂದಿನಿತೂ ಕಾಣಿಸಿಲ್ಲ.ಹಾಗಾಗಿ ಎಲ್ಲರೂ ಕುಟುಂಬ ಸಮೇತ ಹೋಗಿ ನೋಡುವುದಕ್ಕೆ ಅಡ್ಡಿ ಇಲ್ಲ.ಕೊಟ್ಟ ದುಡ್ಡಿಗೆ ಮೋಸ ಇಲ್ಲವೇ ಇಲ್ಲ 


ಎಲ್ಲದರ ನಡುವೆ  ದೈವಗಳನ್ನು ಸಿನೆಮಾದ ಪಾತ್ರವಾಗಿ ತಂದದ್ದು ಸರಿಯೇ ? ಎಂಬ ಜಿಜ್ಞಾಸೆಯೊಂದು ಉಳಿಯುತ್ತದೆ ,ರಾಮಾಯಣ ಮಹಾ ಭಾರತ ಸೀರಿಯಲ್ ಗಳಲ್ಲಿ‌ ಇನ್ನಿತರ ಸಿನೇಮಗಳಲ್ಲಿ ದೇವರುಗಳನ್ನು ಪಾತ್ರವಾಗಿಸಿಲ್ಲವೇ ? ಎಂಬ ಉತ್ತರ ಹೇಳಬಹುದಾದರೂ ಒಂದು ಸಂಸ್ಕೃತಿಯ ಜೀವಾಳವಾಗಿರುವ ಆರಾಧ್ಯ ದೈವಗಳನ್ನು ಆರಾಧನಾ ಸ್ವರೂಪದಲ್ಲಿಯೇ ಸಿನೇಮಾದ ಪಾತ್ರವಾಗಿಸಿದ್ದನ್ನು ತೀರ ಸಹಜವಾಗಿ ಒಪ್ಪುದು ಕಷ್ಟವೆನಿಸುತ್ತದೆ ನನಗೂ ,


ಇನ್ನೇನು ಹೇಳಲಿ..ನನಗೆ ಇನ್ನೊಮ್ಮೆ ನೋಡಬೇಕೆಂದಿದೆ.


ಡಾ.ಲಕ್ಷ್ಮೀ ಜಿ ಪ್ರಸಾದ್

mobile 9480516684

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

- ಡಾ.ನಾ ಮೊಗಸಾಲೆ 

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಎಂಟು   ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

 ದಿ: 01.08.2021          ಕನ್ನಡ ಸಂಘ, ಕಾಂತಾವರ


 ಕರಾವಳಿಯ ಸಾವಿರದೊಂದು ದೈವಗಳು

ಅನುಕ್ರಮಣಿಕೆ 315  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಅಧ್ಯಯನಾತ್ಮಕ ಗ್ರಂಥ   ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್

No comments:

Post a Comment