Sunday 10 December 2023

ಕರಾವಳಿಯ ಸಾವಿರದೊಂದು ದೈವಗಳು - ಡಾ.ಬಿ ಎ ವಿವೇಕ ರೈ


 ನನ್ನಲ್ಲಿ ಅನೇಕರು  ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಬಗ್ಗೆ ಡಾ.ಬಿ ಎ ವಿವೇಕ ರೈಗಳ ಅಭಿಪ್ರಾಯವೇನೆಂದು ಕೇಳಿದ್ದಾರೆ..

ನನಗೂ ಈ ಬಗ್ಗೆ ಕುತೂಹಲವಿತ್ತು.ಹಾಗಾಗಿ ಪುಸ್ತಕದ ಪ್ರತಿಯೊಂದನ್ನು ನೀಡಿ ಅಭಿಪ್ರಾಯ ತಿಳಿಸಲು ಕೋರಿದ್ದೆ..

ಆದರೆ ಅವರ ಆರೋಗ್ಯ ಸರಿ ಇಲ್ಲವಂತೆ .ಹಾಗಾಗಿ ಅಭಿಪ್ರಾಯ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.ಬಹುಶಃ ನಾನು ಕೊಟ್ಟ  ಪುಸ್ತಕವನ್ನು ತೆರೆದು ನೋಡಲು ಸಾಧ್ಯವಾಗಿಲ್ಲ ..

ನಾನು ಇತ್ತೀಚೆಗೆ ಮತ್ತೆ ಅವರಿಗೆ ಮೆಸೇಜ್ ಮಾಡಿ ಕೇಳಿದ್ದೆ

ಆಗ ಅವರು ಆರೋಗ್ಯ ಸುಧಾರಿಸಿಲ್ಲ..ದೀರ್ಘ ಕಾಲದ ಆರೈಕೆಯಲ್ಲಿದ್ದೇನೆ ಎಂದು ಉತ್ತರಿಸಿದ್ದಾರೆ.ಈ ಅವರ ಉತ್ತರ ನೋಡಿದ ಮೇಲೆ ನನಗೆ ಉಂಟಾಗಿದ್ದ ಸಂಶಯ ಪರಿಹಾರ ಆಯಿತು.ಅವರ ಆಪ್ತ ಸ್ನೇಹಿತರಾದ ನಾ ದಾ ಶೆಟ್ಟಿಯವರು ಅವರ ಸಹೋದ್ಯೋಗಿ ವಿಶ್ವನಾಥರ ಕೃತಿ ಚೌರ್ಯವನ್ನು ಬೆಂಬಲಿಸಿ ನನಗೆ ನಿಂದನೆ ಮಾಡಿದ್ದರು.ಹಾಗಾಗಿ ದೂರು ನೀಡುವಾಗ ದೀಕ್ಷಿತ್ ಶೆಟ್ಟಿಗಾರ್ ಅನೂಪ್ ನರಿಯೂರು,ರಾಮ‌ಪ್ರಸಾದ್ ,ಕಾಮ್ ಅನ್ಸಾರಿ ಮೂಡಂಬೈಲು ಪವನಜ ಮೊದಲಾದವರ ಜೊತೆ ನಾ ದಾ ಶೆಟ್ಟಿಯವರ ಹೆಸರೂ ಸೇರಿಸಿದ್ದು ,ಇವರ ಮೇಲೂ ಎರಡೆರಡು ಬಾರಿ fir ಹಾಗೂ ಚಾರ್ಜ್ ಶೀಟ್ ಆಗಿದೆ..ಆ ಕೋಪಕ್ಕೆ ನನ್ನ ಅಧ್ಯಯನ ಗ್ರಂಥದ ಬಗ್ಗೆ ಅಭಿಪ್ರಾಯ ತಿಳಿಸಿಲ್ಲವೇನೋ ಎಂಬ ಸಣ್ಣ ಸಂಶಯ ನನಗೆ ಉಂಟಾಗಿತ್ತು.ಅವರದು ಬಹಳ ದೊಡ್ಡ ಮನಸು..ಉನ್ನತ ವ್ಯಕ್ತಿತ್ವ.ಇಂತಹದ್ದಕ್ಕೆಲ್ಲ ಮನ್ನಣೆ ಕೊಡುವ ಜನ ಅವರಲ್ಲ ಎಂದು ಗೊತ್ತಿತ್ತು ಆದರೂ ಒಳಗಿನಿಂದ ಸಣ್ಣಕೆ ಸಂಶಯ ಕೊರೆಯುತ್ತಿತ್ತು.

ಅವರ ಮೆಸೇಜ್ ನೋಡಿದ ಮೇಲೆ ನಾನೇ ತಪ್ಪು ಗ್ರಹಿಕೆ ಮಾಡಿದೆ ಎಂದು ಬೇಸರವಾಯಿತು..


.ದಯವಿಟ್ಟು ಸ್ವಲ್ಪ ಸಮಯ ಅವರನ್ನು ಯಾರೂ ಸಂಪರ್ಕಿಸಿ ಮಾತನಾಡಬೇಡಿ.ಅವರು ಬೇಗನೆ ಹುಷಾರಾಗಲಿ

Aravinda Bhat ಮಾತೃಶ್ರೀ ಪ್ರಕಾಶನ ಪ್ರಕಾಶನ Govinda Prasad Rachan Ghoshal Budnar Keshava Prasad B

No comments:

Post a Comment